ಮಕ್ಕಳಾಗದವರು,ಅರೋಗ್ಯ ಮತ್ತು ಹಣದ ಸಮಸ್ಯೆ ಇರುವವರು ಈ ದೇವಸ್ಥಾನಕ್ಕೆ ಭೇಟಿ ನೀಡಿ, ಬೇಡಿದ್ದನ್ನು ಈಡೇರಿಸುತ್ತಾನೆ ಈ ಲಕ್ಷ್ಮಿ ನರಸಿಂಹ..!

Hit

ಸಾವಿರ ವರ್ಷಗಳ ಇತಿಹಾಸ ಇರುವ ಈ ದೇವಾಲಯವು ಬೆಂಗಳೂರಿನಿಂದ ಸುಮಾರು 80 ಕಿಲೋ ಮೀಟರ್ ದೂರದಲ್ಲಿ ಇರುವ ದೇವರಾಯನ ದುರ್ಗಾದಲ್ಲಿದೆ. ಇಲ್ಲಿ ನೆಲೆಸಿರುವ ಸಾಕ್ಷಾತ್ ಲಕ್ಷ್ಮಿ ನರಸಿಂಹ ಸ್ವಾಮಿ ದರ್ಶನ ಪಡೆದರೆ ಮಾಡಿದ ಪಾಪಗಳು ಕಳೆಯುತ್ತದೆ, ನಿತ್ಯ ನೂರಾರು ಜನ ಮತ್ತು ವಿಶೇಷ ದಿನದಲ್ಲಿ ಸಾವಿರಾರು ಜನ ಭೇಟಿ ನೀಡುತ್ತಾರೆ, ಮಕ್ಕಳಾಗದ ದಂಪತಿಗಳು ಇಲ್ಲಿಗೆ ಬಂದು ಹೋದಮೇಲೆ ಮಕ್ಕಳಾಗಿದೆ, ಇದು ವೈದ್ಯ ಲೋಕಕ್ಕೂ ಸವಾಲ್ ಆಗಿದೆ.

ಭಕ್ತಿಯಿಂದ ಬೇಡಿದವರಿಗೆ ಲಕ್ಷ್ಮಿ ನರಸಿಂಹ ಆರೋಗ್ಯ, ವಿದ್ಯೆ, ಧನ, ಸಂಪತ್ತು ಕರುಣಿಸಿದ್ದಾನೆ. ಇದಕ್ಕೆ ಸಾವಿರಾರು ಉದಾಹರಣೆಗಳು ಸಹ ಇದೆ, ತಮ್ಮ ವ್ಯವಹಾರ, ಉದ್ಯೋಗ, ಶುರು ಮಾಡೋ ಮೊದಲು ಲಕ್ಷ್ಮಿ ನರಸಿಂಹನ ದರ್ಶನ ಆಶೀರ್ವಾದ ಪಡೆದು ನಂತರ ಶುರು ಮಾಡಿದರೆ ಶುಭಾರಂಭ ಸಿಗುವುದು ನಿಶ್ಚಿತ.

ಚಾರಣ ಪ್ರಿಯರಿಗೆ ಈ ತಾಣ ಅದ್ಭುತವಾಗಿದೆ, ಕುಂಬಿ ಬೆಟ್ಟ ಹತ್ತಿ ಶ್ರೀ ಭೋಗ ನರಸಿಂಹನ ದರ್ಶನ ಪಡೆದರೆ ಜೀವನ ಪಾವನ. ಪ್ರತಿ ನಿತ್ಯ ದೇಗುಲದಲ್ಲಿ ಮುಜರಾಯಿ ಇಲಾಖೆಯಿಂದ ಅನ್ನ ಸಂತರ್ಪನೆ ಸಹ ಇರುತ್ತದೆ.

ಬೆಂಗಳೂರಿನಿಂದ ತುಮಕೂರು ಟೋಲ್ ರಸ್ತೆ ಮುಖಾಂತರ ಫ್ಲೈಓವರ್ ಕೆಳಗೆ ಬಲ ತಿರುವು ಪಡೆದು ಉಡಿಗೆರೆ ಮಾರ್ಗವಾಗಿ ಚಲಿಸಿ ಬೆಟ್ಟಕ್ಕೆ ಎಡಬದಿ ಸಿಗುವ ದಾರಿಯನು ಅನುಸರಿಸಿದರೆ ಸಿಗುವುದು ದೇವರಾಯನ ದುರ್ಗಾ. ಇಲ್ಲಿ ಬೆಟ್ಟದ ಮೇಲೆ ನೋಡಲು ದೇವಸ್ಥಾನ, ಗುಡ್ಡದ ಮೆಲೊಂದು ಕಲ್ಲಿನ ಮಂಟಪ ಆಗು ಕಣ್ಣಿಗೆ ಮನೋಹರ ನೋಟ ಸಿಗುತ್ತದೆ. ನಂತರ ಬೆಟ್ಟವನ್ನು ಇಳಿದು ಮುಂದೆ ಚೆಲಿಸಲು ಸಿಗುವುದು ನಾಮದ ಚಿಲುಮೆ. ನೀವು ಹೋಗಿ ದೇವರ ಪವಾಡ ತಿಳಿದುಕೊಳ್ಳಿ ಮತ್ತು ಎಲ್ಲರಿಗು ಸಾರಿ ಹಾಗು ನರಸಿಂಹ ಸ್ವಾಮಿಯ ಕೃಪೆಗೆ ಪಾತ್ರಾರಾಗಿ ಮತ್ತು ಇತರರಲ್ಲೂ ಈ ವಿಷಯವನ್ನು ಹಂಚಿಕೊಳ್ಳಿ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *