ಗ್ಯಾಸ್ಟ್ರಿಕ್ ಸಮಸ್ಯೆ ಹಾಗು ಜ್ವರದ ಜೊತೆ ಜಾಂಡಿಸ್ ಹೋಗಲಾಡಿಸುವ ಮೂಲಂಗಿ ಮನೆಮದ್ದು

ಆರೋಗ್ಯ

ಜ್ವರದಿಂದ ದೇಹದಲ್ಲಿ ತಾಪಮಾನ ತೀವ್ರವಾಗಿದ್ದರೆ ಹಸಿ ಮೂಲಂಗಿಯ ರಸಕ್ಕೆ ಉಪ್ಪು ಬೆರೆಸಿ ಕುಡಿದರೆ ಇಳಿಮುಖವಾಗುತ್ತದೆ. ಜೇನ್ನೊಣ ಕಡಿತದ ನೋವು ಮತ್ತು ಬಾವು ಇಳಿಯಲು ಮೂಲಂಗಿಯ ರಸದ ಲೇಪನ ಪರಿಣಾಮಕಾರಿಯೆನಿಸಿದೆ.

ಮೂಲಂಗಿಯಲ್ಲಿರುವ ಮೈರೊಸಿನೇಸ್, ಡಯಸ್ಟೇಟ್, ಎಮಿಲೇಸ್, ಎಸ್ಟೆರೇಸ್ ಕಿಣ್ವಗಳು ಪಿತ್ಥಕೋಶದ ಸೋಂಕು ಮತ್ತು ಹುಣ್ಣುಗಳನ್ನು ನಿವಾರಿಸುತ್ತವೆ. ಕಾಮಾಲೆ ಜಾಂಡಿಸ್ ರೋಗ ಬಂದಾಗ ರಸದ ಸೇವನೆ ಮಾಡಿದರೆ ರೋಗವನ್ನು ಶೀಘ್ರವಾಗಿ ಗುಣಪಡಿಸಿ ಕೆಂಪು ರಕ್ತಕಣಗಳನ್ನು ಹೆಚ್ಚಿಸುತ್ತದೆ.

ಪಿತ್ಥಕೋಶದ ಕಲ್ಲನ್ನು ಕರಗಿಸುತ್ತದೆ. ಪಿತ್ಥ ಜನಕಾಂಗದ ರಕ್ಷಣೆಗೆ ತುಂಬ ಸಹಕಾರಿ. ಆಹಾರದಲ್ಲಿರುವ ಪ್ರೊಟೀನ್ ಮತ್ತು ಕೊಬ್ಬನ್ನು ತ್ವರಿತವಾಗಿ ಅರಗಿಸಲು ಅಗತ್ಯವಾದ ಪಿತ್ಥರಸವನ್ನು ಹೆಚ್ಚು ಸ್ರವಿಸುತ್ತದೆ. ಇದರ ರಸ ಸೇವನೆಯನ್ನು ಆರು ದಿನಗಳ ಕಾಲ ಮಾಡಿದರೆ ಕೊಲೆಸ್ಟ್ರಾಲ್ ಪ್ರಮಾಣ ಕಡಮೆಯಾಗುತ್ತದೆ. ಬೊಜ್ಜು ಇಳಿಯುತ್ತದೆ.

ಜೀರ್ಣಕ್ರಿಯೆಗೆ ನೆರವಾಗುವ ಕಾರ್ಬೋಹೈಡ್ರೇಟ್ಸ್ ಮೂಲಂಗಿಯಲ್ಲಿದೆ. ಹೆಚ್ಚುನೀರನ್ನು ಹೀರಿಕೊಳ್ಳಲು ಕರುಳಿಗೆ ಸಹಕರಿಸುವ ಮೂಲಕ ವಿಸರ್ಜನ ದ್ರವ್ಯಗಳನ್ನು ಮೃದುಗೊಳಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ. ಪೈಲ್ಸ್ ಬಾಧೆಯಿರುವವರಿಗೆ ಉಪಯುಕ್ತ. ಕರುಳಿನ ಚಲನೆಯನ್ನು ಹೆಚ್ಚಿಸುವ ನಾರು ಮೂಲಂಗಿಯಿಂದ ಸಿಗುತ್ತದೆ. ಅದು ಹೊಟ್ಟೆಯ ಹುಳಗಳನ್ನು ಕೊಲ್ಲುತ್ತದೆ.

ಮೂತ್ರ ವಿಸರ್ಜನೆಯನ್ನು ಹೆಚ್ಚಿಸಿ ಉರಿಮೂತ್ರ, ಉರಿಯೂತ, ಮೂತ್ರಕೋಶದ ಸೋಂಕುಗಳನ್ನು ಮೂಲಂಗಿಯ ರಸ ಗುಣಪಡಿಸುತ್ತದೆ. ಹಸಿವು ಹೆಚ್ಚಿಸುತ್ತದೆ. ಅಗ್ನಿ ಮಾಂದ್ಯ, ಗ್ಯಾಸ್ಟ್ರಿಕ್ ಸಮಸ್ಯೆಯನ್ನೂ ನಿವಾರಿಸುತ್ತದೆ. ದೇಹದ ತೂಕ ನಷ್ಟವಾಗದಂತೆ ನೋಡಿಕೊಳ್ಳುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *