ತಂದೆಯಿಲ್ಲದೆ ತಾಯಿಯ ನೆರಳಿನಲ್ಲಿ ಬೆಳೆದು ಕಡು ಬಡತನಕ್ಕೆ ಸವಾಲ್ ಹಾಕಿ PSI ಆದ ಹೆಣ್ಣುಮಗಳ ಯಶೋಗಾದೆ ಇದು

ಇತರೆ

ನಮಸ್ತೇ ಪ್ರಿಯ ಓದುಗರೇ, ಮನಸ್ಸಿದ್ದರೆ ಮಾರ್ಗ ಹಾಗೂ ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬ ಗಾದೆ ಮಾತುಗಳನ್ನು ನಾವು ಚಿಕ್ಕ ವಯಸ್ಸಿನಲ್ಲಿ ಶಾಲೆಯಲ್ಲಿ ಕಲಿತಿದ್ದೇವೆ. ಹೌದು ಪ್ರತಿಯೊಬ್ಬರೂ ಚಿಕ್ಕವರು ಇದ್ದಾಗ ಒಂದಲ್ಲ ಒಂದು ಕನಸುಗಳನ್ನು ಹೊತ್ತಿರುತ್ತಾರೆ. ಕೆಲವರಿಗೆ ಇವುಗಳನ್ನು ನನಸು ಮಾಡಲು ಎಲ್ಲ ರೀತಿಯ ಸೌಲಭ್ಯಗಳು ಇದ್ದರೂ ಕೂಡ ಅವರು ಕಷ್ಟ ಪಡುವುದಿಲ್ಲ. ಹೀಗಾಗಿ ಗುರಿ ಮುಟ್ಟಲೂ ಕೂಡ ಆಗುವುದಿಲ್ಲ. ಆದರೆ ಇನ್ನೂ ಕೆಲವು ಜನರಿಗೆ ಸೌಲಭ್ಯಗಳು ದೊರೆಯದೇ ಕಡು ಬಡತನದಿಂದ ಬರುವ ಜನರ ಕನಸುಗಳಿಗೆ ಮಿತಿಯೇ ಇಲ್ಲ ಗೆಳೆಯರೇ, ಆದರೆ ಅವರ ಕಷ್ಟಗಳು ಕಿತ್ತು ತಿನ್ನುವ ಬಡತನ ಎಲ್ಲವೂ ಅವರ ಕನಸುಗಳನ್ನು ಹಿಂದಿಕ್ಕುತ್ತುತ್ತದೆ. ಇದೇ ಕೆಲವು ಕಾರಣಗಳಿಂದ ಅವರು ಹಿಂದೆ ಸರಿಯುತ್ತಾರೆ. ಆದರೆ ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬ ಉದಾಹರಣೆಗೆ ರೇಣುಕಾ ಬಾಗಲಕೋಟೆ ಜಿಲ್ಲೆಯವರು ಸಾಕ್ಷಿಯಾಗಿದ್ದಾರೆ. ಮನೆಯಲ್ಲಿ ಬಡತನವಿದ್ದರು ಸಾಕಷ್ಟು ಕಷ್ಟ ಪಟ್ಟು ಓದಿ ಸಾಧನೆಯನ್ನು ಮೆರೆದಿದ್ದಾರೆ. ರೇಣುಕಾ ವಡ್ಡರ್ ಬಾಗಲಕೋಟೆ ಜಿಲ್ಲೆಯವರು. ಮನೆಯಲ್ಲಿ ಕೂಲಿ ಮಾಡಿದರೆ ಮಾತ್ರ ಹೊಟ್ಟೆ ತುಂಬುವ ಪರಿಸ್ಥಿತಿ ಇವರದಾಗಿತ್ತು. ಇವರು ತಮ್ಮ ಚಿಕ್ಕ ವಯಸ್ಸಿನಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು.

ಇವರ ತಾಯಿ ಮಕ್ಕಳನ್ನು ಸಾಕಳು ತುಂಬಾನೇ ಕಷ್ಟವಾಗುತ್ತಿರುವ ಕಾರಣ ಇವರು ಬೇರೆಯವರ ಮನೆಯಲ್ಲಿ ಪಾತ್ರೆಯನ್ನು ತೊಳೆಯುವ ಕೆಲಸವನ್ನು ಮಾಡಿ ಮಕ್ಕಳನ್ನು ಸಾಕಿದ್ದಾರೆ. ಅಷ್ಟೇ ಅಲ್ಲದೇ ತಮಗೆ ಎಷ್ಟೇ ಕಷ್ಟವಾದರೂ ಕೂಡ ಮಕ್ಕಳು ಮುಂದೆ ದೊಡ್ಡವರಾಗಿ ಒಳ್ಳೆಯ ಸಾಧನೆಯನ್ನು ಮಾಡಬೇಕೆಂದು ಅವರಿಗೆ ಒಳ್ಳೆಯ ಶಿಕ್ಷಣವನ್ನು ನೀಡಿದ್ದಾರೆ. ಮಗಳಿಗೆ ಒಳ್ಳೆಯ ಶಿಕ್ಷಣ ನೀಡುವ ತಾಯಿಗೆ ಏನಾದ್ರೂ ಸಾಧನೆಯನ್ನು ಮಾಡಿ ತೋರಿಸಬೇಕು ಎಂದು ಮಗಳು ಕನಸನ್ನು ಹೊತ್ತು ಸಾಧನೆಯನ್ನು ಮಾಡಿದ್ದಾರೆ. ರೇಣುಕಾ ಅವರು 2013ರಲ್ಲಿ ತಮ್ಮ ಬಿ.ಎಡ್ ಮುಗಿಸಿದರು. ಹಾಗೂ 2016 ತಳ್ಳಿ ಬಿ. ಎ ಪದವಿಯನ್ನು ಪಡೆದಿದ್ದಾರೆ. ಹೀಗೆ ಇವರು ತುಂಬಾನೇ ಕಷ್ಟ ಪಟ್ಟು ಇಂದು ಸಬ್ ಇನ್ಸ್ಪೆಕ್ಟರ್ ಆಗಿ ಆಯ್ಕೆ ಆಗಿದ್ದಾರೆ. ಮನೆಯಲ್ಲಿ ಎಷ್ಟೇ ಕಷ್ಟವಿದ್ದರು ಕಡು ಬಡತನದಿಂದ ಬೆಳೆದು ಬಂದು ಸಾಧನೆಯನ್ನು ಮಾಡಿ ತಾಯಿಯ ಮುಖದಲ್ಲಿ ಸಂತೋಷ ಸಂತಸದ ಕಳೆಯನ್ನು ತಂದಿದ್ದಾರೆ. ಇವರ ಮನೆಯಲ್ಲಿ ಇಂದು ಸಂತಸದ ವಾತಾವರಣ. ಬಡತನದಿಂದ ಕೆಲವರು ತಮ್ಮ ಆಸೆಗಳನ್ನು ಕನಸುಗಳನ್ನು ಮುಚ್ಚಿ ಹಾಕುತ್ತಾರೆ. ಆದರೆ ಈಕೆ ಬಡತನವನ್ನು ಮೆಟ್ಟಿ ನಿಂತಿದ್ದಾರೆ ಹಾಗೂ ಇವರ ಸಾಧನೆಯನ್ನು ಮೆಚ್ಚಿ ಹಲವಾರು ನಗರದವರು ಇವರನ್ನು ಕರೆತಂದು ಇವರಿಗೆ ಸನ್ಮಾನ ಮಾಡಿ ಶುಭ ಹಾರೈಸಿದ್ದಾರೆ.

ಬಡತನ ನಮ್ಮ ಕನಸುಗಳಿಗೆ ಎಂದು ಒಂದು ಕಪ್ಪು ಚುಕ್ಕೆ ಅಲ್ಲವೆಂದು ಇವರು ಸಾಧನೆ ಮಾಡಿ ತೋರಿಸಿದ್ದಾರೆ. ಸತತವಾದ ಓದು ಪರಿಶ್ರಮ ಪ್ರಯತ್ನ ನಿರಂತರ ಓದಿನ ಫಲವಾಗಿ ಇಂದು ಇವರು ಪಿಎಸ್ಐ ಆಗಿ ಕೆಲಸಕ್ಕೆ ಆಯ್ಕೆಯಾಗಿದ್ದಾರೆ. ಮಗಳ ಈ ಸಾಧನೆಗೆ ತಾಯಿ ಸಿಹಿ ತಿನಿಸುವ ಮೂಲಕ ಆನಂದ ಭಾಷ್ಪ ಹರಿಸಿದ್ದಾರೆ. ಇವರು ಸಾಧನೆ ಮಾಡುವ ಮೂಲಕ ಮನೆಯ ಎಲ್ಲ ಕಷ್ಟಗಳನ್ನು ದೂರ ಮಾಡಿದ್ದಾರೆ. ಇವರ ಸಾಧನೆಗೆ ಕುಟುಂಬದವರ ಸಹಾಯ ಸಹಕಾರವೇ ಕಾರಣ. ಕುಟುಂಬದವರ ಬೆನ್ನೆಲುಬಿನಿಂದ ಮಾತ್ರ ರೇಣುಕಾ ಅವರು ಸಾಧನೆಯ ಶಿಖರವನ್ನು ಏರಿದ್ದಾರೆ. ರೇಣುಕಾ ಅವರು ಎಲ್ಲ ಬಡತನದಲ್ಲಿ ಇದ್ದು ಕಷ್ಟ ಪಡುವ ಪ್ರತಿಯೊಬ್ಬರಿಗೂ ಇವರು ಮಾದರಿಯಾಗಲಿ. ದಾರಿ ದೀಪ ಆಗಿದ್ದಾರೆ ಹಾಗೂ ಮಾರ್ಗದರ್ಷಕರು ಆಗಿದ್ದಾರೆ. ಬಡತನ ಇದೆ ಎಂದು ನಮ್ಮ ಕನಸುಗಳನ್ನು ಕಟ್ಟಿ ಮೂಲೆಯಲ್ಲಿ ಎಸೆಯಬೇಡಿ. ಕನಸು ನನಸು ಮಾಡಲು ಎಷ್ಟೇ ಕಷ್ಟವಾದರೂ ಸರಿಯೇ ಸಾಧಿಸಿ ತೋರಿಸಬೇಕು. ಅದಕ್ಕೆ ಈ ಮಹಾತಾಯಿ ಉದಾಹರಣೆ ಆಗಿದ್ದಾರೆ. ಇವರ ವೃತ್ತಿಜೀವನ ಆನಂದಮಯ ಆಗಿರಲಿ ಅಂತ ಅಶೀಸೋಣ.

Leave a Reply

Your email address will not be published. Required fields are marked *