ಅಜೀರ್ಣತೆ ಅಥವಾ ಅಸಿಡಿಟಿ ಸಮಸ್ಯೆಗೆ ಇಲ್ಲಿದೆ ಆಯುರ್ವೇದ ಮನೆಮದ್ದುಗಳು. ಅವು ಯಾವುದು ಅಂತೀರಾ?? ಇಲ್ಲಿದೆ ನೋಡಿ???

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಇತ್ತೀಚಿನ ದಿನಗಳಲ್ಲಿ ರೋಗಗಳು ಹೆಚ್ಚುತ್ತಲೇ ಇವೆ. ಅದರಲ್ಲೂ ಹೊಟ್ಟೆಗೆ ಸಂಭಂದ ಪಟ್ಟ ಸಮಸ್ಯೆಗಳು ಒಂದಲ್ಲ ಒಂದು ಕಾಡುತ್ತಲೇ ಇರುತ್ತವೆ. ಹೊಟ್ಟೆ ನೋವು ಹೊಟ್ಟೆ ಉಬ್ಬರ ಹೊಟ್ಟೆ ಉರಿ ಗ್ಯಾಸ್ಟ್ರಿಕ್ ಅಸಿಡಿಟಿ ಮಲಬದ್ಧತೆ ಅನೇಕ ಸಮಸ್ಯೆಗಳು ಬೆನ್ನಹತ್ತುತ್ತಲೇ ಇರುತ್ತವೆ. ಇವೆಲ್ಲವೂ ನಾವು ಸೇವನೆ ಮಾಡುವ ಆಹಾರದಿಂದಲೇ ಅಂತ ಹೇಳಿದರೆ ತಪ್ಪಾಗಲಾರದು. ನಾವು ಯಾವ ಸಮಸ್ಯೆ ಆದರೂ ಕೂಡ ಚಿಕ್ಕದಾಗಿರುವಾಗಲೇ ಪರಿಹಾರ ಮಾಡಿಕೊಳ್ಳಬೇಕು ಇಲ್ಲವಾದರೆ ಅದು ಮುಂದೆ ಗಂಭೀರವಾದ ಸಮಸ್ಯೆಯಾಗಿ ಪರಿಣಮಿಸುತ್ತದೆ. ಅಂಥಹ ಸಮಸ್ಯೆಯಲ್ಲಿ ಗ್ಯಾಸ್ಟ್ರಿಕ್ ಅಥವಾ ಅಸಿಡಿಟಿ. ಈ ಸಮಸ್ಯೆಯನ್ನು ನಾವು ನಿರ್ಲಕ್ಷ್ಯ ಮಾಡಿದರೆ ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ನಿಮಗೇನಾದರೂ ಅಜೀರ್ಣತೆ ಸಮಸ್ಯೆ ಉಂಟಾಗಿದ್ದರೆ ನಿಮ್ಮ ಅಡುಗೆ ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಬಳಸಿಕೊಂಡು ನೀವು ಮನೆಮದ್ದು ತಯಾರಿಸಿ ಇಂತಹ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು. ಹಾಗಾದರೆ ಬನ್ನಿ ಅವುಗಳ ಬಗ್ಗೆ ಪರಿಚಯ ಮಾಡಿ ಕೊಡುತ್ತೇವೆ. ಇಂಗು.

 

ನಮ್ಮ ಅಡುಗೆ ಮನೆಯಲ್ಲಿ ಸಿಗುವ ಇಂಗು ನಮ್ಮ ಆರೋಗ್ಯಕ್ಕೆ ಬಹಳ ಉತ್ತಮವಾದದ್ದು ಆದರೆ ಇದರ ಗುಣಗಳ ಬಗ್ಗೆ ಜನರಿಗೆ ಅಷ್ಟಾಗಿ ಗೊತ್ತಿಲ್ಲ ವಿರುವ ಕಾರಣ ಇದನ್ನು ಹೆಚ್ಚು ಬಳಕೆ ಮಾಡುವುದಿಲ್ಲ. ಆದರೆ ಇದು ನಿಮ್ಮ ಅಸಿಡಿಟಿ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಬಹಳ ಪ್ರಯೋಜನಕಾರಿ. ಹೌದು ಒಂದು ಲೋಟ ನೀರಿಗೆ ಸ್ವಲ್ಪ ಇಂಗು ಹಾಕಿ ರುಚಿಗೆ ಸಕ್ಕರೆಯನ್ನು ಹಾಕಿ ಕುಡಿಯಬೇಕು. ಕುಡಿಯುವಾಗ ಗಾಢವಾದ ವಾಸನೆ ಬರುತ್ತದೆ. ಆದರೆ ಹೊಟ್ಟೆಯಲ್ಲಿ ತುಂಬಿರುವ ಗಾಳಿಯನ್ನು ಹಾಗೂ ಅಸಿಡಿಟಿ ಅನ್ನು ದೂರ ಮಾಡುತ್ತದೆ. ಇನ್ನೂ ಎರಡನೆಯದು ಓಂ ಕಾಳು ಅಥವಾ ಅಜವಾಯಿನ್ ಹೌದು ಇದು ಅಸಿಡಿಟಿ ಗೆ ದಿವ್ಯ ಔಷಧ ಅಂತ ಹೇಳಬಹುದು. ಒಂದು ಲೋಟ ಬಿಸಿ ನೀರಿಗೆ ಸ್ವಲ್ಪ ಅಜವಾಯಿನ್ ಸ್ವಲ್ಪ ಕಲ್ಲುಪ್ಪು ಹಾಕಿ ಮಿಕ್ಸ್ ಮಾಡಿ ಕುಡಿದರೆ ಸಾಕು ಹೊಟ್ಟೆಗೆ ಸಂಭಂದಿಸಿದ ಎಲ್ಲ ಸಮಸ್ಯೆಗಳು ಮತ್ತು ವಾಯು ಮತ್ತು ಅಜೀರ್ಣತೆ ಸಮಸ್ಯೆ ಬೇಗನೆ ನಿವಾರಣೆ ಆಗುತ್ತದೆ. ಇನ್ನೂ ಮೂರನೆಯದು ಜೀರಿಗೆ ನೀರು. ಹೌದು ಜೀರಿಗೆ ನೀರು ಅಸಿಡಿಟಿ ಸಮಸ್ಯೆಯನ್ನು ತಕ್ಷಣವೇ ನಿವಾರಣೆ ಮಾಡುತ್ತದೆ.

 

ಹೀಗಾಗಿ ನಿಮಗೇನಾದರೂ ಇಂತಹ ಸಮಸ್ಯೆಗಳು ಇದ್ದರೆ ಖಂಡಿತವಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರಿಗೆ ಜೀರಿಗೆ ಹಾಕಿ ಉಗುರು ಬೆಚ್ಚಗೆ ಮಾಡಿ ಕುಡಿಯಬಹುದು ಅಥವಾ ಊಟವಾದ ಮೇಲೆ ಜೀರಿಗೆಯನ್ನು ಜಗಿದು ತಿನ್ನುವುದರಿಂದ ಅಜೀರ್ಣತೆ ಸಮಸ್ಯೆಯು ದೂರವಾಗುತ್ತದೆ.ಇನ್ನೂ ಪುದೀನಾ ಎಲೆಗಳನ್ನು ಕೂಡ ನೀರಿನಲ್ಲಿ ಹಾಕಿ ಕುಡಿದರೆ ಸಾಕು ಖಂಡಿತವಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಉಪಶಮನ ಆಗುತ್ತದೆ. ಇನ್ನೂ ಮೊಸರು. ಮೊಸರು ಬಗ್ಗೆ ಹೇಳಬೇಕಾದ್ದದ್ದು ಏನು ಇಲ್ಲ ಗೆಳೆಯರೇ. ಇದು ನಮ್ಮ ಒಟ್ಟಾರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಒಂದು ಬಟ್ಟಲಿನಲ್ಲಿ ಮೊಸರು ಸ್ವಲ್ಪ ಜೀರಿಗೆ ಪುಡಿ ಸ್ವಲ್ಪ ಉಪ್ಪು ಹಾಕಿ ಸೇವನೆ ಮಾಡಿದ್ರೆ ಅಜೀರ್ಣತೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಅಜೀರ್ಣತೆ ಸಮಸ್ಯೆ ಇರುವವರು ತಂಪು ನೀರನ್ನು ಕುಡಿಯುವ ಬದಲು ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ಬಹಳ ಸೂಕ್ತವಾದದ್ದು. ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.

Leave a Reply

Your email address will not be published. Required fields are marked *