ಸೆಪ್ಟೆಂಬರ್ 26, ನವರಾತ್ರಿಯ ಸೋಮವಾರದ ಶುಭದಿನದಂದು ನಿಮ್ಮ ಭವಿಷ್ಯ ಹೇಗಿದೆ???

ಜ್ಯೋತಿಷ್ಯ

ನಮಸ್ತೆ ಪ್ರಿಯ ಓದುಗರೇ, ಇಂದು ಶುಭಕೃತ್ಥ್ ನಾಮ ಸಂವತ್ಸರ, ದಕ್ಷಿನಯಿನೆ, ಶರದ್ ಋತು, ಅಶ್ವೇಜ ಮಾಸ ಶುಕ್ಲ ಪಕ್ಷ, ಇಂದು ಸೆಪ್ಟೆಂಬರ್ 26, ಸೋಮವಾರ. ಇಂದು ಉತ್ತರ ಪಾಲ್ಗುಣಿ ನಕ್ಷತ್ರ. ಇಂದಿನ ಭವಿಷ್ಯವನ್ನು ಎಲ್ಲಾ ರಾಶಿಗಳಿಗೆ ತಿಳಿಯೋಣ. ಇಂದು ನವರಾತ್ರಿ ಹಬ್ಬ ಆರಂಭ ಆಗುತ್ತೆ. ಮೇಷ ರಾಶಿಗೆ ಇದು ಬಹಳ ಒಳ್ಳೆಯ ದಿನ. ನಿಮಗೆ ನಿಮ್ಮ ಆತ್ಮ ವಿಶ್ವಾಸ ಇವತ್ತು ತುಂಬಾ ಜಾಸ್ತಿ ಇರುತ್ತೆ. ಪ್ರೇಮ ಪ್ರೀತಿ ಪ್ರಕರಣಗಳಲ್ಲಿ ಯಶಸ್ಸು. ಆದ್ರೆ ಇವತ್ತು ನೀವು ಬೇರೆಯವರನ್ನು ಟೀಕೆ ಮಾಡುವಷ್ಟು ದೊಡ್ಡ ಆತ್ಮವಿಶ್ವಾಸವನ್ನು ಇಟ್ಟುಕೊಂಡಿರುತ್ತಿರಿ. ಆದ್ರೆ ಬೇರೆಯವರಿಗೆ ಸ್ವಲ್ಪ ನೆಮ್ಮದಿ ಬೇಜಾರಗಬಹುದು. ಆದ್ದರಿಂದ ನಿಮ್ಮ ಆತ್ಮವಿಶ್ವಾಸವನ್ನು ಸ್ವಲ್ಪ ಕಡಿಮೆ ಮಾಡಿಕೊಂಡು ಎಲ್ಲರ ಜೊತೆ ವಿನಯದಿಂದ ವರ್ತಿಸಿ. ವೃಷಭ ರಾಶಿಯವರಿಗೆ ಇಂದು ಮನೆಯಲ್ಲಿ ಸ್ವಲ್ಪ ಜವಾಬ್ದಾರಿಗಳು ಜಾಸ್ತಿ ಇರಬಹುದು. ಟೆನ್ಷನ್ ಆಗುತ್ತೆ ವೃಷಭದಂಥೆ ಸಿಟ್ಟು ಬರುತ್ತೆ ಇವತ್ತು ಆ ತರಹದ ದಿನ ಆಗಿರಬಹುದು. ನಿಮ್ಮ ಸಿಟ್ಟನ್ನು ಯಾರು ನೋಡುವುದಿಲ್ಲ. ಆದ್ರೆ ಇಂದು ಆ ಸಿಟ್ಟನ್ನು ತೋರಿಸುವ ಬೇಕಾಗು ಬರಬಹುದು. ಹಾಗಾಗಿ ಜಾಗರೂಕತೆಯಿಂದ ವ್ಯವಹಾರ ಮಾಡಿ. ಮಿಥುನ ರಾಶಿಯವರಿಗೆ ಇಂದು ಬಹಳ ಒಳ್ಳೆಯ ದಿನ. ಮನಸ್ಸಿಗೆ ಅತಿ ಹೆಚ್ಚಿನ ನೆಮ್ಮದಿ. ನಿಮ್ಮ ಮಾತುಕತೆಯಿಂದ ಬೇರೆಯವರನ್ನು ಗೆಲ್ಲುತ್ತೀರಿ. ಆತ್ಮ ವಿಶ್ವಾಸ ದಿಂದ ಮುಂದೆ ಹೋಗ್ತೀರಾ. ಕರ್ಕಾಟಕ ರಾಶಿಗೆ ಇಂದು ಬಹಳ ಒಳ್ಳೆಯ ದಿನ. ಮನೆಯಲ್ಲಿ ಮನದಲ್ಲಿ ನೆಮ್ಮದಿ ಕಾಣುತ್ತೀರಿ. ನಿಮ್ಮ ಮನೆಯವರ ಜೊತೆ ಬಹಳ ಒಳ್ಳೆಯ ವ್ಯವಹಾರ ಮಾಡಿ. ಇದರಿಂದ ಸಂಸಾರದಲ್ಲಿ ಬಹಳ ಸುಖ ಶಾಂತಿ ಕಾಣುತ್ತೀರಿ. ಸಿಂಹ ರಾಶಿಗೆ ನಿಮ್ಮ ರಾಶಿಯಲ್ಲಿ ಚಂದ್ರ ಇರುವುದರಿಂದ ಮನಸ್ಸಿಗೆ ಅತಿ ಹೆಚ್ಚಿನ ನೆಮ್ಮದಿ ಆತ್ಮವಿಶ್ವಾಸ ಎಲ್ಲಾ ವಿಷಯಗಳಲ್ಲಿ ನಿಮಗೆ ಬೇಕಾದ ತಿರುವುಗಳನ್ನು ನೀವು ಕಾಣುತ್ತೀರಿ. ಹೀಗಾಗಿ ಬಹಳ ಒಳ್ಳೆಯ ರೀತಿಯಲ್ಲಿ ನೀವು ದಿನವನ್ನು ಕಳಿತಿರಾ. ಕನ್ಯಾ ರಾಶಿಗೆ ಮನಸ್ಸಿಗೆ ನೆಮ್ಮದಿ ಸ್ವಲ್ಪ ಕಡಿಮೆ ಆದಂತೆ ಭಾಸವಾಗುತ್ತದೆ. ನಿಮ್ಮ ಅಭಿಮಾನದಿಂದ ನಿಮಗೆ ಇವತ್ತು ಸ್ವಲ್ಪ ಹರ್ಟ್ ಆಗಬಹುದು ಮನಸ್ಸಿಗೆ ನೆಮ್ಮದಿ ಕಡಿಮೆ ಆಗಬಹುದು. ಅಭಿಮಾನವನ್ನು ಪಕ್ಕಕ್ಕೆ ಇಡೀ. ಎರಡು ದಿನಗಳ ನಂತರ ಎಲ್ಲವೂ ಬದಲಾಗುತ್ತೆ. ನಿಮ್ಮ ಗೌರವ ಪುನಃ ನಿಮಗೆ ಪ್ರಾಪ್ತಿ ಆಗುತ್ತೆ. ತುಲಾ ರಾಶಿಗೆ ಇಂದು ಬಹಳ ಒಳ್ಳೆಯ ದಿನ. ನಿಮ್ಮ ಸಾಮಾಜಿಕ ವಾತಾವರಣದಲ್ಲಿ ಹಾಗೂ ಸಾಮಾಜಿಕ ವ್ಯವಹಾರಗಳಲ್ಲಿ ದೊಡ್ಡ ಯಶಸ್ಸು. ಗುಂಪುಗಳಿಂದ ನೆಮ್ಮದಿ. ಧನಾಗಮ. ಬ್ಯುಸಿನೆಸ್ ಮಾಡುವವರಿಗೆ ಒಳ್ಳೆಯ ದಿನ. ನಿಮ್ಮ ಕಾಂಟ್ರಾಕ್ಟ್ ಇಂದು ಎರಡರಷ್ಟು ಹೆಚ್ಚುತ್ತೆ. ವೃಶ್ಚಿಕ ರಾಶಿಗೆ ಬಹಳ ಒಳ್ಳೆಯ ದಿನ. ಕಾರ್ಯಕ್ಷೇತ್ರದಲ್ಲಿ ಅತಿ ಹೆಚ್ಚಿನ ಯಶಸ್ಸು. ನೀವು ಏನೇ ಮಾಡಿದರೂ ಎಲ್ಲರೂ ಕೂಡ ನಿಮ್ಮನ್ನು ಸಲಹೆ ಕೇಳುವಂತೆ ನಿಮ್ಮ ಪ್ರತಿಷ್ಠೆ ಇವತ್ತು ಹೆಚ್ಚಾಗುತ್ತೆ. ಬಹಳ ಒಳ್ಳೆಯ ದಿನ. ಮನಸ್ಸಿಗೆ ನೆಮ್ಮದಿ. ಧನಸ್ಸು ರಾಶಿಗೆ ಇವತ್ತು ಭಾಗ್ಯೋದಯ ಆಗುತ್ತೆ. ಮನಸ್ಸಿನಲ್ಲಿ ನೆಮ್ಮದಿ. ದೊಡ್ಡವರ ಆಶೀರ್ವಾದ ಪ್ರಾಪ್ತಿ. ನಿಮ್ಮ ಇಷ್ಟ ದೇವತೆಯೆಂದು ನಿಮಗೆ ಆಶೀರ್ವಾದ ಪ್ರಾಪ್ತಿ. ಹಾಗಾಗಿ ಒಳ್ಳೆಯ ಕೆಲಸ ಮಾಡಿ ಹತ್ತರಷ್ಟು ಪುಣ್ಯವನ್ನು ಪಡೆಯಿರಿ. ಮಕರ ರಾಶಿಗೆ ಮನಸ್ಸಿನಲ್ಲಿ ಸ್ವಲ್ಪ ನೆಮ್ಮದಿ ಕಡಿಮೆ ಆದಂತೆ ಭಾಸವಾಗುತ್ತದೆ. ಅನೇಕ ವಿಷಯಗಳಲ್ಲಿ ಮನಸ್ಸಿಗೆ ನೋವು ಅಥವಾ ಖೇದ ಎನ್ನಿಸುತ್ತೆ. ಇದು ಯಾವುದು ನಿಜ ಅಲ್ಲ. ಎರಡು ದಿನಗಳ ನಂತರ ನಿಮಗೆ ಅರ್ಥ ಆಗುತ್ತೆ. ಹಾಗಾಗಿ ಈ ಎರಡು ದಿನಗಳಲ್ಲಿ ಪ್ರಾರ್ಥನೆ ಜಾಸ್ತಿ ಮಾಡಿ. ಕುಂಭ ರಾಶಿಗೆ ಇವತ್ತು ಬಹಳ ಒಳ್ಳೆಯ ದಿನ. ಆದ್ರೆ ಬೇರೆಯವರು ಮುಖ್ಯ ಆಗುತ್ತಾರೆ. ಬೇರೆಯವರ ಜೊತೆ ಯಾವ ರೀತಿ ವ್ಯವಹಾರ ಮಾಡುತ್ತಿರಿ ಎನ್ನುವುದರ ಮೇಲೆ ನಿಮ್ಮ ಯಶಸ್ಸು ಅವಲಂಬಿತ ಆಗಿರುತ್ತೆ. ಆದ್ದರಿಂದ ಬೇರೆಯವರ ಜೊತೆ ಸರಿಯಾದ ರೀತಿಯಲ್ಲಿ ವ್ಯವಹಾರ ಮಾಡಿ ಅವರ ಯಶಸ್ಸನ್ನು ನಿಮ್ಮದಾಗಿಸಿ. ಮೀನಾ ರಾಶಿಗೆ ಮನಸ್ಸಿಗೆ ನೆಮ್ಮದಿ ಪ್ರಾಪ್ತಿ. ಸಾಮಾಜಿಕ ವ್ಯವಹಾರಗಳಲ್ಲಿ ಯಶಸ್ಸು. ಮತ್ತು ಮಿತ್ರರು ಜಾಸ್ತಿ ಆಗುತ್ತಾರೆ. ಶತ್ರುಗಳು ಹಿಮ್ಮೆಟ್ಟುವ ದಿನ. ಆದ್ದರಿಂದ ಎಲ್ಲಾ ಕಡೆಗೆ ಜಯ. ಶುಭದಿನ

Leave a Reply

Your email address will not be published. Required fields are marked *