ಹೆಣ್ಣು ಮಕ್ಕಳು ಎಡಗಾಲಿಗೆ ಕಪ್ಪು ದಾರ ಕಟ್ಟಿಕೊಳ್ಳುತ್ತಾರಲ್ಲಾ ಯಾಕೆ ಗೊತ್ತಾ? ಹೀಗೆ ಕಟ್ಟಿಕೊಂಡರೆ ಕೆಟ್ಟ ದೃಷ್ಟಿ ಬೀಳಲ್ವಾ?

ಉಪಯುಕ್ತ ಮಾಹಿತಿ

ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗು ಕೆಲವು ಹೆಣ್ಣು ಮಕ್ಕಳು ತಮ್ಮ ಎಡಗಾಲಿಗೆ ಕಪ್ಪು ದಾರ ಅಥವಾ ಕಪ್ಪು ಮಣಿಗಳಿಂದ ಮಾಡಿದ ಸರವನ್ನು ಕಾಲಿಗೆ ಕಟ್ಟಿಕೊಂಡಿರುತ್ತಾರೆ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಂಡಿರುವುದನ್ನು ನೀವು ನೋಡಿಯೇ ಇರ್ತಿರ. ಇಷ್ಟಾದರೂ ಕೆಲವರು ಫ್ಯಾಷನ್ ಎಂದು ಸಹ ಈ ಥರ ಕಪ್ಪು ದಾರವನ್ನು ಕಾಲಿಗೆ ಕಟ್ಟಿಕೊಳ್ಳುತ್ತಾರೆ. ಆದ್ರೆ ನಾವು ಇಂದಿನ ಲೇಖನದಲ್ಲಿ ಕಪ್ಪು ದಾರ ಕಟ್ಟಿಕೊಳ್ಳುವುದರ ಹಿಂದಿನ ಧಾರ್ಮಿಕ ಅಂಶಗಳು ಏನೇನು ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತೆ ಎಂದು ತಿಳಿಯೋಣ. ನಾವೆಲ್ಲರೂ ಕೆಟ್ಟ ಕಣ್ಣು ಅಥವಾ ನಕಾರಾತ್ಮಕ ಶಕ್ತಿಗಳ ಬಗ್ಗೆ ಕೆಳಿರ್ಥಿವಿ. ಈ ಕಪ್ಪು ದಾರವನ್ನು ಕಟ್ಟಿಕೊಳ್ಳುವುದರಿಂದ ನಕಾರಾತ್ಮಕ ಶಕ್ತಿಗಳ ಆ ವ್ಯಕ್ತಿಯಿಂದ ದೂರ ಇರುತ್ತೆ. ಇದು ನಿಜಾನಾ ಬನ್ನಿ ತಿಳಿಯೋಣ. ಮಹಿಳೆಯರು ಕಪ್ಪು ದಾರವನ್ನು ಕಟ್ಟುವುದು ಯಾಕೆ ಗೊತ್ತ? ಶನಿಯನ್ನು ಅತ್ಯಂತ ಶಕ್ತಿಶಾಲಿ ಗೃಹ ಎಂದು ಹೇಳುತ್ತಾರೆ. ನ್ಯಾಯದ ದೇವರು ಎಂದು ಕರೆಯುವ ಶನಿದೇವ ಕಪ್ಪು ಬಣ್ಣದ ಒಡೆಯ. ಶನಿದೇವನ ಕೋಪ ಎಲ್ಲರಿಗೂ ಗೊತ್ತಿದೆ ಅಂತಹ ಪರಿಸ್ಥಿತಿಯಲ್ಲಿ ಶನಿ ಗ್ರಹವನ್ನು ಬಲಪಡಿಸಲು ಅಥವಾ ಶನಿ ದೋಷವನ್ನು ನಿವಾರಿಸಲು ಕೆಲವರು ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುತ್ತಾರೆ.

 

ಇನ್ನೂ ಶನಿಯ ಕೋಪದಿಂದ ನಿಮ್ಮ ಆರೋಗ್ಯ ಹದಗೆಡಬಹುದು ಅಥವಾ ನೀವು ಹಣಕಾಸಿನ ಅಡತದೆಗಳನ್ನೂ ಎದುರಿಸಬೇಕಾಗಿ ಬರಬಹುದು. ನಿಮ್ಮ ಪಾದಗಳಿಗೆ ಕಪ್ಪು ದಾರ ಕಟ್ಟಿಕೊಂಡರೆ ನೀವು ಖಂಡಿತವಾಗಿ ಅನೇಕ ಪ್ರಯೋಜನಗಳನ್ನು ಪಡಿತಿರ ಅಂತ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇನ್ನೂ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಕಪ್ಪು ದಾರವನ್ನು ಧರಿಸುತ್ತಾರೆ. ಹೌದು, ಬಹಳ ಸಮಯದಿಂದ ಹಣಕಾಸಿನ ತೊಂದರೆಗಳು ಎದುರಿಸುತ್ತಾ ಇದ್ರೆ ಅಥವಾ ವ್ಯವಹಾರದಲ್ಲಿ ಪದೇ ಪದೇ ನಷ್ಟವನ್ನು ಅನುಭವಿಸುತ್ತಾ ಇದ್ರೆ ಅದಕ್ಕೆ ಕಾರಣ ನಿಮ್ಮ ಜಾತಕದಲ್ಲಿ ಯಾವುದೇ ಗ್ರಹದ ದುರ್ಬಲ ಸ್ಥಾನ ಕೂಡ ಆಗಿರಬಹುದು.ನೀವು ಸ್ವಲ್ಪ ಪರಿಹಾರ ಪಡೆಯಬೇಕು ಅಂದುಕೊಂಡರೆ ನೀವು ನಿಮ್ಮ ಪಾದಗಳಿಗೆ ಕಪ್ಪು ದಾರವನ್ನು ಧರಿಸಬೇಕು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತೆ. ಹಾಗೆ ದುಷ್ಟ ಕಣ್ಣಿನಿಂದ ಈ ಕಪ್ಪು ದಾರ ರಕ್ಷಿಸುತ್ತದೆ. ಕೆಲವೊಂದು ಸಲ ಎಲ್ಲವೂ ಒಳ್ಳೆಯದಾಗಿದ್ದರೋ ಇದ್ದಕ್ಕಿಂದ್ದ ಹಾಗೆ ಕೆಟ್ಟದಾಗಿಬಿದುತ್ತೆ. ಇಂತಹ ಸ್ಥಿತಿಯಲ್ಲಿ ಕಪ್ಪು ದಾರ ಧರಿಸಬೇಕು. ಹಿಂದಿನ ಕಾಲದಲ್ಲಿ ಹಿಂದೂ ಧರ್ಮದಲ್ಲಿ ದೃಷ್ಟಿಕೋನದ ಬಗ್ಗೆ ಅನೇಕ ಉಲ್ಲೇಖಗಳು ಇವೆ.

 

ದುಷ್ಟ ಕಣ್ಣು ಅಂದ್ರೆ ಅದೇ ಅರ್ಥ ಅಂತಹ ಸಮಯದಲ್ಲಿ ಕೆಟ್ಟ ಕಣ್ಣನ್ನು ತಪ್ಪಿಸಲು ಅಥವಾ ಕೆಟ್ಟ ಕಣ್ಣನ್ನು ತೆಗೆದು ಹಾಕಲು ಜ್ಯೋತಿಷ್ಯದಲ್ಲೂ ಅನೇಕ ಪರಿಹಾರಗಳನ್ನು ಹೇಳಲಾಗಿದೆ. ಇದರಲ್ಲಿ ಪಾದಗಳಿಗೆ ಕಪ್ಪು ದಾರವನ್ನು ಕಟ್ಟುವುದು ಕೂಡ ಉತ್ತಮ ಪ್ರಯೋಜನ ಎಂದು ಹೇಳಿದೆ. ವಿಶೇಷವಾಗಿ ಯಾವುದೇ ನಕಾರಾತ್ಮಕ ಶಕ್ತಿ ನಿಮ್ಮನ್ನು ಮಾಡುತ್ತಿದ್ದರೆ ಅದು ಕಪ್ಪು ದಾರವನ್ನು ಕಟ್ಟುವುದರಿಂದ ನಾಶ ಆಗುತ್ತಂತೆ. ಇನ್ನೂ ರಾಹು ಕೇತು ಗ್ರಹವನ್ನು ಇದು ಬಲಪಡಿಸುತ್ತದೆ. ಹೌದು ರಾಹು ಕೇತು ಗ್ರಹಗಳು ಸಹ ವ್ಯಕ್ತಿಯ ಜೀವನದ ಮೇಲೆ ಹೆಚ್ಚು ಅಫೆಕ್ಟ್ ಮಾಡುತ್ತಂತೆ. ನಿಮ್ಮ ಜಾತಕದಲ್ಲಿ ಈ ಎರಡು ಗ್ರಹಗಳು ಏನಾದ್ರೂ ದುರ್ಬಲ ಆದ್ರೆ ನೀವು ಈ ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳಬಹುದು. ನಿಮ್ಮ ವೈಯಕ್ತಿಕ ಜೀವನದ ಮೇಲೆ ಇದು ಹೆಚ್ಚು ಅಫ್ಯಕ್ಟ್ ಉಂಟು ಮಾಡುತ್ತೆ. ಈ ವಿಷಯಗಳನ್ನು ಯಾವಾಗಲೂ ನೆನಪಲ್ಲಿ ಇಟ್ಟುಕೊಳ್ಳಿ. ಕಪ್ಪು ದಾರವನ್ನು ಧರಿಸಿ ಅದನ್ನು ಭೈರವ ದೇವನ ದೇವಸ್ಥಾನಕ್ಕೆ ಹೋಗಿ ನಿಮ್ಮ ಕಾಲಿನಲ್ಲಿ ಕಪ್ಪು ದಾರವನ್ನು ಧರಿಸಿದ ಮೇಲೆ ಶನಿ ದೇವನ ಮಂತ್ರವನ್ನು ಕನಿಷ್ಟ 21 ಬಾರಿ ಜಪಿಸಿ. ಕಪ್ಪು ದಾರವನ್ನು ಧರಿಸಲು ಶನಿವಾರ ಉತ್ತಮ ದಿನ. ಕಪ್ಪು ದಾರದೊಂದುಗೆ ಕೆಂಪು ಮತ್ತು ಹಳದಿ ದಾರವನ್ನು ಇಂದಿಗೂ ಹಾಕಿಕೊಳ್ಳಬೇಡೀ. ಕಪ್ಪು ದಾರವನ್ನು ಧರಿಸಿದ ಮೇಲೆ ನೀವು ಪ್ರತಿನಿತ್ಯ ಹನ್ನೊಂದು ದಿನ ಗಾಯತ್ರಿ ಮಂತ್ರವನ್ನು ಪಠಿಸಿ. ಶುಭದಿನ.

Leave a Reply

Your email address will not be published. Required fields are marked *